"ಶ್ರೀ ಹೇಮಕೂಟ ಗಾಯತ್ರಿ ಪೀಠ ಹಂಪಿ: 1371–2026"



Chapter One 

ಗುರು ಶಬ್ದದ ಅರ್ಥ, ಗುಕಾರಸ್ಯ ಗುಣಾತೀಶ, ರೂಪಾತೀತ ಗುಣಗಳಿಗೂ ರೂಪಕ್ಕೂ ಅತೀತರಾ ದಂತಹ ಜಗದ್ಗುರು ಶ್ರೀ ಮುದ್ದುಸಂಗ ಮಹಾಮುನಿ ಪ್ರಪಂಚ ವನ್ನು ಉದ್ದಾರ ಮಾಡಿದರು.

ಮಾನವನ ಮಾನ, ಅಭಿಮಾನ ರಕ್ಷಣೆಗಾಗಿ ಈಶ್ವರನ ಹಣೆ ಗಣ್ಣಿಂದ ಹುಟ್ಟಿದ ದೇವಾಂಗನ (ನವಲನ) ಅನುಚರರ ಪರದ ಪವಿತ್ರ ದೇವಾಂಗ ಮತವಿದು. ದೇವಾಂಗ ಧರ್ಮ ಸುಮಾರು 5-6 ಶತಮಾನಗಳ ಹಿಂದೆ ಸ್ವಧರ್ಮ ರಕ್ಷಕರಿಲ್ಲದೆ ಪರಧರ್ಮದ ದಾಳಿಗೆ ಸಿಕ್ಕಿ, ದೇವಾಂಗದವರು ಬಲವಂತವಾಗಿ ಮತಾಂತರ ಗೊಂಡ ಕಾಲದಲ್ಲಿ ಗಂಗಾವತಿ ಗ್ರಾಮದಲ್ಲಿ ದೇವಾಂಗ ಧರ್ಮೋ ದ್ವಾರಕ ಮಹಾಪುರುಷ ಫಣಿಗೌಡ ಜನಿಸಿದನು. ದೇವಾಂಗ ಧರ್ಮ ಗ್ರಂಥಗಳ ಸತತ ಪಠನೆ, ಧರ್ಮ ಗ್ರಂಥಾನ್ವೇಷಣೆ ಮುಂತಾ ದವಲ್ಲಿ ನಿರತನಾಗಿ ಚೌಡೇಶ್ವರಿ ಅಮ್ಮನವರ ಪರದು ಭಕ್ತನಾಗಿ ಕುಲಕಾಯಕವಾದ ನೇಯ್ಕೆ ಕೆಲಸ ಮಾಡುತ್ತಿದ್ದನು.

ಕಲ ಕಾಲಾನಂತರ ಬಲವಂತದಿಂದ ಮತಾಂತರಗೊಳಿಸಲು ಮುಂದಾದ ಪರಮತದವರು ಗೌಡನ ದೇವಾಂಗ ಮತ ಪರ ವಾದವನ್ನು ಒಪ್ಪದೇ, ವಿದ್ಯಾನಗರಾಧಿಪತಿ ವೀರಪ್ರತಾಪನ ಮುಂದೆ ಹೋದರು. ಆಗ ಘಣಗೌಡ ರಾಜನಿಗೆ ನಮ್ಮ ದೇವಾಂಗ ಧರ್ಮ, ಗುರು, ದೈವತ, ರೂಢಿ ನೀತಿಗಳೇ ಬೇರೆ. ನಮ್ಮ ಆಚಾರ ವ್ಯವಹಾರಗಳು, ಗುರು ಪರಂಪರೆ ಶಾಸ್ತ್ರ ಸಮ್ಮತ, ಅನಾದಿ ಕಾಲದವು" ಎಂದು ಅರಿಕೆ ಮಾಡಿದನು. " ನಿನ್ನ ದೇವಾಂಗ ಮತ ಸನಾತನ ಧರ್ಮವೆಂದು ಸಮರ್ಥಿಸಿ ಗುರುವನ್ನು ತೋರಿದರೆ ಮಾತ್ರ ನಿನ್ನ ವಾದ ಸಮ್ಮತ ವೆಂದು ರಾಜ ಹೇಳಿದನು. ಫಣಿಗೌಡ ಅರಸನಿಂದ ಕೆಲ ದಿನಗಳ ಅವಧಿ ಕೇಳಿಕೊಂಡು ತೆರಳಿದನು.

ಫಣಿಗೌಡ ಪುಣ್ಯಕ್ಷೇತ್ರಗಳು, ಸಪ್ತ ಮೋಕ್ಷಪುರಿಗಳನ್ನೂ ಅನೇಕ ಮಹನೀಯರನ್ನೂ ಕಂಡು ಗುರುಗಳ ಶೋಧನೆ ಮಾಡಿದನು. ಕೊನೆಗೆ ವಾರಣಾಸಿಯಲ್ಲಿ ಮಹಾ ಪುರುಷನೊಬ್ಬ ಹೀಗೆ ಸುಮ್ಮನೆ ಅಲೆಯದ, ಭಗವಂತನನ್ನು ಕುರಿತು ಪವಿತ್ರ ಸ್ಥಳದಲ್ಲಿ ತಪಸ್ಸು ಮಾಡಲು ಹೇಳಿದನು. ಅದರಂತೆ, ಗಂಗಾವತಿ ಗ್ರಾಮದ ಪಕ್ಕದಲ್ಲಿ ಕಾಡಿನ ನಡುವೆ ಸಣ್ಣ ಬೆಟ್ಟದ ಮೇಲೆ ಒಂದು ಗವಿ ಯಲ್ಲಿ ಫಣಿಗೌಡ ವರ್ಷಗಳ ಕಾಲ ತಪಸ್ಸು ಮಾಡಿದರೂ ಕೈಗೂಡದ್ದರಿಂದ, ತಾನು ಬದುಕಿ ಫಲವಿಲ್ಲವೆಂದೂ ದೇಹತ್ಯಾಗ ಮಾಡಬೇಕೆಂದುಕೊಂಡನು. ಮನದಾಳದಲ್ಲಿ ಮುಂದುವರಿಸುವ ಭಾವನೆ ಇದ್ದುದರಿಂದ, ತಪಸ್ಸನ್ನು ಮುಂದುವರಿಸಿದನು.

ಒಂದು ದಿನ ಫಣಿಗೌಡ ಘೋರ ತಪಸ್ಸಿನಲ್ಲಿದ್ದಾಗ, ಮಧುರ ನಾದ ಕೇಳಿಸಿದ ಕಡೆ ನೋಡಿದನು. ಕಣ್ಣು ಕೋರೈಸುವ ಒಂದು ದಿವ್ಯ ಪ್ರಭೆ ಇವನ ಮುಂದೆ ಬಂದು ನಿಂತು ಇವನನ್ನು ಎಚ್ಚರಿಸಿತಂ. ಎದುರು ನಿಂತ ತೇಜ ಪೂಂಜ ದಿವ್ಯ ಮೂರ್ತಿಯನ್ನು ಕಂಡು

ಸಾಕ್ಷಾತ್ ದೇವಲ ಮಹಾಮುನಿಯ ತನ್ನ ಮೊರೆ ಕೇಳಿ. ಬಂದಂತಾಯಿತು. ಶಾಂತಿಯುತ ಮುಖ, ತೇಜೋಮಯ ಕಣ್ಣುಗಳು, ಕೈಗಳಲ್ಲಿ ದಂಡ ಕಮಂಡಲು ಇರುವ ಆ ಮಹಾಮುನಿ ಫಣಿಗೌಡನನ್ನು ಕುರಿತು ಏಕ್ಕೆ ತಪಸ್ಸು ಮಾಡುತ್ತಿದ್ದೀಯೆಂದು ಕೇಳಿದನು. ಮರಿಗೌಡ ಅಡ್ಡ ಬಿದ್ದು, “ ನಾನು ದೇವಾಂಗ ಧರ್ಮಿ, ಪರಧರ್ಮಿಯರ ದಾಳಿಯಿಂದ ನಮ್ಮ ಧರ್ಮ ನಾಶವಾಗುತ್ತಿದೆ. ಉಪ್ಪಾರ ಮಾರ್ಗ ತೋರವಾಗಿದ ಎಂದನು. “ ದೇವಲ ಮಹಾಮುನಿಯ: ದೇವಾಂಗದವರ ಮೊದಲ ಗುರು, ದೇವಾಂಗ ಧರ್ಮದ ಉದ್ಘಾರಕ್ಕಾಗಿ ಗುರುಗಳ ಆಜ್ಞೆಯಂತೆ ನಿನ್ನ ಅಗಮನ ಕ್ಕಾಗಿ ಕಾದಿರುವೆ. ಈಗ ಸಕಾಲವಾಗಿದೆ ನಡೆ " ಎಂದು ಗವಿ ಯಿಂದ ಇಬ್ಬರೂ ಹೊರಬಂದರು.

ಫಣಿಗೌಡನ ಕೋರಿಕೆಯಂತೆ, ವಿದ್ಯಾನಗರದ ವೀರ ಪ್ರತಾಪ ರಾಜ ಎಲ್ಲ ಮತದವರನ್ನು ಬರಮಾಡಿಕೊಂಡನು. ರಾಜನ ಆಸ್ಥಾನ ದಲ್ಲಿ ಎಲ್ಲ ಪಂಡಿತರೂ ಸೇರಿದಾಗ ಭರಗೌಡ ಇಲ್ಲದನ್ನು ಕಂಡು ಪರಮಾದವರು ಅವನ ಮೇಲೆ ಕುಹಕವಾಡಿದರು. ಇದಕ್ಕಿ ವಂತೆ, ರಾಜ ಸಭೆಯಲ್ಲಿ ಪಾದುಕೆಗಳ ಸದ್ದು ಕೇಳಿಸಿದಾಗ ಆ ಕಡೆಗೆ ಎಲ್ಲರ ಗಮನ ಹರಿಯಿತು, ರಾಜದ್ವಾರದಲ್ಲಿ ಅಚಾನಬಾಹು, ಹೊಳೆವ ವಿಶಾಲ ಕಣ್ಣುಗಳು, ತೇಜೋವಂತ, ಜಟಾಧಾರಿ ಮುನಿಯೊಬ್ಬ ಭಳಗೌಡನೊಂದಿಗೆ ಇರುವುದು ಗೋಚರಿಸಿತು. ಸೀಮಿತಾಸನದಲ್ಲಿ ಕುಳಿತರು. ಗೌಡ ರಾಜನಿಗೆ ನಮಸ್ಕರಿಸಿ, " ದೊರೆಯ, ಇವರು ದೇವಲನ ಪರಂಪರೆಯ ದೇವಾಂಗ ಜಗದ್ಗುರು ಶ್ರೀ ಶ್ರೀ ಶ್ರೀ ಮುದ್ದುಸಂಗಸ್ವಾಮಿ ಮಹಾಮುನಿ ಗಳು, 'ದೇವಾಂಗ ಧರ್ಮ, ಪುರಾತನರು, ಶಾಸ್ತ್ರ ಸಮ್ಮತ ವೆಂದು ಇವರು ಪ್ರತಿಪಾದಿಸುವರು. ಯಾವ ಮತದವರೇ ಅಗಲಿ ಅವರ ಜೊತೆ ವಾದಿಸಬಹುದು " ಎಂದು ಸಾರಿ ಹೇಳಿದನು. ನೆರೆದಿದ್ದ ಸಭಿಕರಲ್ಲಿ ಕೆಲವರು ಇದೆಲ್ಲ ತಮಾಣಿ ಅಂದುಕೊಂಡರು.

ಮುದ್ದುಸಂಗಸ್ವಾಮಿ ನಮ್ರವಾಗಿ ನಿಂತು ವಾದದಲ್ಲಿ ಯಾರಾ ದರೂ ತನ್ನನ್ನು ಸೋಲಿಸಿದಲ್ಲಿ ತಾನು ಅವರ ಮತ ಸ್ವೀಕರಿಸುವೆ. ನಂದನು. ಗುರುಗಳೂ, ಪಂಡಿತರೂ ತಮ್ಮ ಮತಗಳೇ ಶ್ರೇಷ್ಟ ಎಂದು ವಾದ ಹೂಡಿದರು. ಶಾಸ್ತ್ರಸಮ್ಮತ ಉತ್ತರಗಳನ್ನು ಮುದ್ದುಸಂಗಸ್ವಾಮಿ ನೀಡಿ ದೇವಾಂಗ ಧರ್ಮದ ಹೆಚ್ಚಳಿಕೆಯನ್ನು ಪ್ರತಿಪಾದಿಸಿದಾಗ, ಅವರ ಅಪಾರ ವಿದ್ವತ್ತೂರ್ಣ ಅಭಿಪ್ರಾಯ ಗಳಿಗೆ ಎಲ್ಲರೂ ಮಾರುಹೋದರು, ನಿರುತ್ತರರಾದರು. ವೀರ ಪ್ರತಾಪ ಮಹಾರಾಜ ಸಿಂಹಾಸನದಿಂದ ಎದ್ದು ಬಂದು ಮುದು ಸಂಗಸ್ವಾಮಿಗೆ ಸಾಷ್ಟಾಂಗವೆರಗಿ ಅವರು ಜಗದ್ಗುರುವೆಂದು ಸಾಬ ಅವರಿಗೆ ಸಲ್ಲುವ ಎಲ್ಲ ಬಿರುದು ಬಾವಲಿಗಳನ್ನು ಕೊಟ್ಟು ಮರ್ಯಾದಿಸಿದನು.

ದೇವಲೋಕದಿಂದ ದೇವಾಂಗ ಕರೆತಂದ ಮಾನಿ, ಅಭಿಮಾನಿ ದೇವತಾ ಸ್ತ್ರೀಯರು ಹತ್ನಿಗಿಡಗಳಾಗಿ ಪ್ರಕಟವಾದ, ಆಮೋದ.   

Chapter Two 

ಗಾಯತ್ರಿ ಪೀಠದ ಮಾಡಿ ಕುಳ್ಳರಿಸಿ, ಪಾಕ ಮಾಡಿ ದೇವಾಂಗ ಜಗದ್ಗುರುಗಳೆಂದು ಸಾರಿದನು. ಅಲ್ಲಿಂದ ಈ ಪೀಠ ದೇವಾಂಗ ಮತರ ಮೂಲ ಜಗದ್ಗುರು ಪೀಠವಾಯಿತು, ಕೆಲ ಕಾಲಾನಂತರ ಮುವಾಗ ಸ್ವಾಮಿಗಳು ಇಣಿಗಡನನ್ನು ಶಿಷ್ಯನಾಗಿದ್ದು ಮುಂದಿನ ಪೀಠಾಧಿಕಾರಿ ಆಗುವಂತೆ ಹೇಳಿದರು. ಗಾಯತ್ರಿ. `ರಕ್ಕೆ ತಾನು ಸೇವಕನೇ ಹೊರತು ಅಧಿಕಾರಸ್ತನ ವೆಂದು ತಳಗಡೆ ಹೇಳಿದಾಗ, ಗುರುಗಳು ಮುಚ್ಚಿ ಫಣಿಗೌಡನ ವ೦ಶದ ಒಬ್ಬ ವಟುವನ್ನು ಪೀಠಕ್ಕೆ ಅಧಿಕಾರಿಯಾಗಿ ಸ್ವೀಕರಿಸಿ

ಒಂದು ಶುಭ ದಿನ ಆ ಬಾಲಕನಿಗೆ ನಾಗಾಭರಣ, ಪ್ರಥಮತ ಗೋತ್ರ, ಮನುದೇವ ಮಹಾಋಷಿ, ಅಶ್ವಲಾಯನ ಸೂತ್ರ ಋಕ್ ಶಾಖಾ, ಸದ್ಯೋಜಾತ ಪ್ರವರಗಳಿಂದ ದೀಕ್ಷೆ ಕೊಟ್ಟು ಮುದ್ದುಸಂಗಸ್ವಾಮಿ ಎಂಬ ತಮ್ಮ ಹೆಸರನ್ನೇ ಇಟ್ಟು ಬ್ರಹ್ಮಪ ದೇಶ ಮಾಡಿ ಹೇಮಕೂಟ ಗಾಯತ್ರೀ ಪೀಠದ ಮೇಲೆ ಕುಳ್ಳಿರಿಸಿ, ಆಶೀರ್ವದಿಸಿ ರಾಜನಿಂದ ಪೀಠಕ್ಕೆ ತಕ್ಕ ವೃತ್ತಿ ಸ್ವಾಸ್ಥ್ಯದ ಹಿರ ಗೋದಕ ದಾನ ಶಾಸನ ಮಾಡಿಸಿಕೊಟ್ಟು ಗಂಗಾವತಿ ಗವಿಯ ಮುಂದಿನ ಅರಳಿ ಮರದ ಎಲೆಗಳ ತುದಿಗಳು ಮೋಟಾಗಿ ಪೂರ್ತಿ ದುಂಡಗೆ (ಗವಿ ಮುಂದಿನ ಮರದ ಎಲೆಗಳು ಈಗ ದುಂಡಾಗಿದೆ) ಆದಾಗ ದೇವಾಂಗರ ಧರ್ಮದ ಉದ್ಧಾರವಾಗಿ ರಂಭ ವಿಮೋಚನೆಯಾಗಿ ಬ್ರಹ್ಮತೇಜಸ್ಸುಳ್ಳವರಾಗಿ ಷೋಡಶ ಕರ್ಮಗಳಲ್ಲಿ ನಿರತರಾಗಿ ಮತ್ತೆ ಸಾಮ್ರಾಜ್ಯವಾದಿಗಳಾಗಿ ಭೂ ಮಂಡಲದಲ್ಲಿ ವರ್ತಿಸುವರೆಂದು ಆದೇಶ ಕೊಟ್ಟು ತಾವು

ಮತ್ತೆ ತಪಃಸಿದ್ಧಿಗಾಗಿ ಗವಿಯನ್ನು ಹೊಕ್ಕರು. ಹಂಪಿಯ ಶ್ರೀ ವಿರೂಪಾಕ್ಷ ದೇವರ ಬಲಗಡೆಯಲ್ಲಿರುವ ಹೇಮಕೂಟ ಗಾಯತ್ರಿ ಪೀಠದ ಅಧಿಕಾರ ಕೊಪ್ಪಳ, ಮುದಕವಿ, ಹಲಗತ್ತಿ, ಹರಿಹರ ಮಠಗಳಲ್ಲಿ ಕೆಲವು ಕಾಲ ನಡೆಯಿತು. ದುರ್ದೈವದಿಂದ ಮುಸ್ಲಿಮರ ದಾಳಿಗೆ ತುತ್ತಾಗಿ ವಿಜಯನಗರ ಪಾಳುಬಿದ್ದು ಮಠದಲ್ಲಿದ್ದ ಅಶ್ವರ್ಯವೂ ಬಹಮನಿ ರಾಜರ ಆ ಪೀಠದಲ್ಲಿದ್ದ ಅಧಿಕಾರಿಗಳು ಬೇರೆಡೆಗಳಲ್ಲಿ ಮರಗಳನ್ನು ಕಟ್ಟಿಕೊಂಡು ಆಶ್ರಯವಿಹೀನರಾದರು. ಅಂದಿನಿಂದ ಗಾಯತ್ರಿ ಪೀಠ ಜಗದ್ಗುರುಗಳಿಲ್ಲದೆ ತೆರವಾಯಿತು.

ಬೆಳಗಾವಿ ಜಿಲ್ಲೆಯ ಗೋಕಾಕದಲ್ಲಿ ದೇವಾಂಗ ಮತಸ್ತರು ಪರಮತದವರ ದಾಳಿ ಎದುರಿಸುವಂತೆ, ಬೆಳಗಾವಿ, ಶಹಪೂರ, ಹೊಸಹಟ್ಟಿ, ವಡಗಾಂವ, ಹೊಸೂರು ಗ್ರಾಮಗಳ ದೇವಾಂಗ ಮತಸ್ತರು ತಮ್ಮ ಪ್ರತಿನಿಧಿಗಳನ್ನು ಗೋಕಾಕಕ್ಕೆ, ದೇವಾಂಗ ಧರ್ಮ ಸನಾತನ ಮತ್ತು ಶಾಸ್ತ್ರ ಸಮ್ಮತವಾದ್ದೆಂದು ಪ್ರತಿ ಪಾದಿಸಲು ಕಳುಹಿಸಿದರು. ಗೋಕಾಕದ ಶ್ರೀ ಮಾರುತಿ ದೇವಾಲಯದಲ್ಲಿ ಇವರು ಸಭೆ ಸೇರಿಸಿ ಪರಮತದವರಿಗೆ ಕರೆ ಕೊಟ್ಟರು. ಸಭೆಯಲ್ಲಿ 2,000 ಜನರಿದ್ದರು. ಪರಮತದವರು ಸಭೆಗೆ ಬಾರದ ತಲೆತಪ್ಪಿಸಿಕೊಂಡರು. ದೇವಾಂಗ ಧರ್ಮವನ್ನು ಸಮರ್ಥಿಸಿದರೂ ಯಾರೂ ವಿರೋಧಿಸಲಿಲ್ಲ. ಪ್ರತಿನಿಧಿಗಳು ತಮ್ಮ ಊರಿಗೆ ಹಿಂದಿರುಗಿದರು.

ನಮ್ಮಲ್ಲಿ ದೇವಾಂಗ ಜಗದ್ಗುರು ಇಲ್ಲದ ಕಾರಣ ಆಗಿಂದಾಗ್ಗೆ ಕಠಿಣ ಪ್ರಸಂಗಗಳು ಬರುತ್ತಿವೆ. ದೇವಾಂಗ ಜಗದ್ಗುರುಗಳಾಗಿದ್ದ ಮುಧುಸಂಗಸ್ವಾಮಿಗಳು ಪ್ರಸಿದ್ಧ ನೀಲಮಣಿಯಾಗಿದ್ದರು. ಅಂತಹ ಮಹಾಮಹಿಮರಿಲ್ಲದೆ ನಮಗೀಗ ಈ ಸ್ಥಿತಿ ಬಂದಿದೆ. ಆದ್ದರಿಂದ ಮ್ಮಲ್ಲಿ ಪೀಠಕ್ಕೆ ಅಧಿಕಾರಸ್ತರನ್ನು ತರಬೇಕೆಂದು ಪಂಚ ಗ್ರಾಮ ಹಳವರ ತೀರ್ಮಾನ, ಕೆಲವು ಪ್ರಣಾಳಿಕೆಗಳನ್ನು ರಚಿಸಿದರು.

ಅದರಲ್ಲಿ ತಿ ಹಂಪಿ ಹೇಮಕೂಟ ಗಾಯತ್ರಿ ಪೀಠದ ವ ಮುಖ್ಯವಾದದ್ದು.

ದೇವಾಂಗ ಮಹಾ ಸಭೆಗಳನ್ನು ಅನೇಕ ಬಾರಿ -5, ಸಮಣಗಳುಳ್ಳ ಬಾಲಕನನ್ನು ನಮ್ಮ ಗುರು ನೀಕ್ಕೆ ಯಾಗಿ ಮಾಡಲು ದೇವಾಂಗ ಮತಸ್ತರಲ್ಲಿ ನಿರತಿಸಿಕ ಬಾ 8-16 ವರ್ಷದ, ದೇವಾಗ ದೈವ ನಾಗಿರಬೇಕು. ಭಾಲಕನ ಪೂರ್ವಜರು ಮೂರು (ತಂದೆ, ತಾತ, ಮುತ್ತಾತ) ಹಿಂದಿನಿಂದಲೂ ಶುದ್ಧರ EE ಬಾಲು ಸರ್ವಾಂಗ ಸುಂದರನಾಗಿ, ಶಾಂತಚಿತ್ರದ, ವಿ ಅವಿವಾಹಿತನಾಗಿರಬೇಕು, ಬಾಲಕರನ್ನು ಹೆತ್ತವರ ದರೂ ಬದುಕಿರಬೇಕು. ಬಾಲಕನ ಮೇಲೆ ತಂದು ಯಕ್ಕು ನಡೆಯದೆ, ದೇವಾಂಗ ಸಭೆಯವರ ಇಷ್ಟದಂತೆ ಮ ಕಾರ್ಯ ನಡೆಯಬೇಕೆಂಬ ನಿಯಮಾವಳಿ ಗೊತ್ತು.

ಮೇಲ್ಕಂಡ ಸದ್ಗುಣಗಳುಳ್ಳ ಬಾಲಕನನ್ನು ಕನ್ಯಾಕ ಹಿಮಾಚಲ ಪರ್ಯಂತ ಹುಡುಕಿದರೂ ಸಿಗಲಿಲ್ಲ. ಫಣಿಗೌಡರ ವಂಶದಲ್ಲಿ ಹಿಂದೆ ಜಗದ್ಗುರುಗಳಾಗಿದ್ದ ಮ ಸಂಗಸ್ವಾಮಿಗಳ ಪರಂಪರೆಯ ವಂಶೋತ್ಪನ್ನನಾದ ಶಂಕರ... ಮುದ್ದುಸಂಗಸ್ವಾಮಿ ಹೊಸಪೇಟೆ ಇವರು ತಮ್ಮ ಮಕ್ಕಳ ಶಿವ ಶಂಕರ ಸ್ವಾಮಿ, ಶ್ರೀ ಕಂಠಸ್ವಾಮಿಯವರನ್ನು ಸಭೆಯ ಮ ಒಪ್ಪಿಸಲಾಗಿ, ಕಿರಿಯವನಾದ ಸಕಲ ಗುಣಸಂಪನ್ನ ತ್ರಿಕ ಸ್ವಾಮಿಯನ್ನು ಪೀಠಾಧಿಕಾರಿಯಾಗಿ ನೇಮಿಸಲು ತಿ ವಾಯಿತು.

ಶ್ರೀಯವರ ಉಪನಯನ ಮಹೋತ್ಸವಕ್ಕೆ ಆಮಂತ್ರಣ ಪತ್ರಿ ಗಳನ್ನು ಕನ್ನಡ, ಮರಾಠಿ, ಅರವ, ತೆಲುಗು, ಇಂಗ್ಲಿಷ್ ಮ ಗಳಲ್ಲಿ ಸುವರ್ಣ ಕೆಂಪು ಶಾಯಿಗಳಲ್ಲಿ ಮುದ್ರಿಸಿ ದೇಶದ ವಿಟ್ಲದ ಗಳಿಗೂ ಕಳುಹಿಸಿದರು. ಶ್ರೀಯವರ ಉಪನಯನ ಸಮಾರ ದೇಶದ ಅನೇಕ ಭಾಗಗಳಿಂದ ಮತ ಬಾಂಧವರು ಬಂದು ಸೇರಿದ ಆಗಿನ ಭಾರತದ ಎಲ್ಲಾ ರೈಲ್ವೆ ಇಲಾಖೆಯವರೂ ಈ ಸಮಾರ ಕ್ಕೆ ಅರ್ಧ ರುಸುಂ ರಿಯಾಯ್ತಿ ತೋರಿದರು.

1910ನೇ ಮೇ 16ರಂದು ದೇವತಾ ಪ್ರತಿಷ್ಠಾಪನೆ ಕಾರ್ಯ ಆರಂಭವಾಯಿತು. ಮೇ 18 ರಲ್ಲಿ ಶುಭ ಮಹೂರ್ತದಲ್ಲಿ ರಾಮಲಿಂಗ ಪ್ರಾಣ ಪ್ರತಿಷ್ಟಾಪನೆ ನೆರವೇರಿತು. ಶ್ರೀ ಶ್ರೀಕ ಸ್ವಾಮಿಯವರಿಗೆ ಗಾಯತ್ರಿ ಮಂತ್ರೋಪದೇಶಕರಾಗಿ ಹರಿತದ ಕೊಪ್ಪಳ, ಮುದಕವಿ, ಹಲಗತ್ತಿ, ಬೆಟಗೇರಿ ಕಡೆಗಳ ಮಠಸ್ತರೂ ಭಾಗವಹಿಸಿ ಶುಭಮಹೂರ್ತದಲ್ಲಿ ನಯನ ಕಾರ್ಯವನ್ನು ನೆರವೇರಿಸಿದರು. ಅದೇ ಕಾವ್ಯಕ್ಕೆ 200 ದೇವಾಂಗ ವಟುಗಳಿಗೂ ಉಪನಯನವಾಯಿತು. ಸ ರಾರು ಜನರು ಶ್ರೀಯವರ ದರ್ಶನಕ್ಕೆ ಬಂದು ಕಾಣಿಕೆಗಳನ್ನು ಅರ್ಪಿಸಿದರು.

ಮೇ 21ರ ಬೆಳಿಗ್ಗೆ ದೇವಾಂಗ ಮಹಾ ಪರಿಷತ್ತು ರಾಜ್ ಬಹದೂರ್ ಪಿ. ತ್ಯಾಗರಾಜ ಚೆಟ್ಟಿಯವರ ಘನ ಅಧ್ಯಕ್ಷತೆಯ ಸೇರಿತು. ಅಧ್ಯಕ್ಷರ ವಿದ್ವತ್ತೂರ್ಣ ಭಾಷಣವಾದ ಮೇಲೆ ಬಳ್ಳಾರಿ ಕಲೆಕ್ಟರ್ ಸ್ಮಿತ್ ಮಾತನಾಡಿದರು.

ಹೊಸದಾಗಿ ಪ್ರತಿಷ್ಠಾಪಿಸಿದ ಶ್ರೀ ರಾಮಲಿಂಗಶ್ವರ ಉದ್ದವ ಮೂರ್ತಿ ಪಲ್ಲಕ್ಕಿ ಉತ್ಸವ ಮೇ 22ರ ರಾತ್ರಿ ಜರುಗಿತು ಶ್ರೀಯವರೂ ಮೇಣೆಯಲ್ಲಿ ದಯಮಾಡಿಸಿ ಭಾಗವಹಿಸಿದರು ದಾರಿಯಲ್ಲಿ ಶ್ರೀ ಪಂಪಾಪತಿಗೆ ಕಾಣಕೆಯಿತ್ತು. ಮಂಗಳ ಮಾಡಿಸಿ ಶ್ವೇತ ವಸ್ತ್ರ, ಪುಷ್ಪಮಾಲೆ ಪಡೆದು, ಶ್ರೀ ಭುವನೇಂದ ದರ್ಶನ ಪಡೆದರು. ಲಕ್ಷಾಂತರ ದೇವಾಂಗ ಮತ ಜನ ತಂಡ ಶ್ರೀಯವರನ್ನು ಮೆರವಣಿಗೆಯಲ್ಲಿ ಹಿಂಬಾಲಿಸಿತ್ತು.

Chapter Three 

ಫಣಿಗೌಡ ಬಿನ್ ಶ್ರೀ ಶ್ರೀ ಶ್ರೀ ಮುದ್ದುಸಂಗ ಸ್ವಾಮಿಯವರ ಐತಿಹಾಸಿಕ ಗುರುತು ಮತ್ತು ಹಂಪಿಯಲ್ಲಿರುವ ಶ್ರೀ ಹೇಮಕೂಟ ಗಾಯತ್ರಿ ಪೀಠದೊಂದಿಗಿನ ಅವರ ಸಂಬಂಧ.

ಹದಿನಾಲ್ಕನೇ ಶತಮಾನದಲ್ಲಿ (ಸುಮಾರು 1370 ರ ದಶಕದಲ್ಲಿ), ಗಂಗಾವತಿಯ ಗವಿಮಠದಲ್ಲಿ, ದೇವಾಂಗ ಸಮುದಾಯದ ಪ್ರಮುಖ ಧಾರ್ಮಿಕ ಮತ್ತು ಸಂಘಟನಾ ನಾಯಕರಾದ ಫಣಿಗೌಡ, ದೇವಾಂಗರ ಧಾರ್ಮಿಕ ಪದ್ಧತಿಗಳು, ಸಂಪ್ರದಾಯಗಳು ಮತ್ತು ಆಧ್ಯಾತ್ಮಿಕ ಗುರುತನ್ನು ಸಂಘಟಿಸುವ, ಪ್ರಚಾರ ಮಾಡುವ ಮತ್ತು ಸಾಂಸ್ಥಿಕಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ತುಂಗಭದ್ರಾ ಪ್ರದೇಶದಲ್ಲಿ ತೀವ್ರವಾದ ಸಾಮಾಜಿಕ-ರಾಜಕೀಯ ಬಲವರ್ಧನೆಯ ಅವಧಿಯಲ್ಲಿ ಅವರ ನಾಯಕತ್ವವು ಹೊರಹೊಮ್ಮಿತು, ಇದು ಆರಂಭಿಕ ವಿಜಯನಗರ ಸಾಮ್ರಾಜ್ಯದ ಉದಯದೊಂದಿಗೆ ನಿಕಟ ಸಂಬಂಧ ಹೊಂದಿದೆ.

ಐತಿಹಾಸಿಕ ಪುರಾವೆಗಳು ಮತ್ತು ಮಧ್ಯಕಾಲೀನ ದಕ್ಷಿಣ ಭಾರತದ ವಿಶಾಲವಾದ ಸಾಮಾಜಿಕ-ರಾಜಕೀಯ ಸಂದರ್ಭವು ಗೌಡ, ಪಟೇಲ್ ಮತ್ತು ಸೆಟ್ಟಿಯಂತಹ ಬಿರುದುಗಳು ಪ್ರಾಥಮಿಕವಾಗಿ ಗೌರವಾನ್ವಿತ, ಆಡಳಿತಾತ್ಮಕ ಅಥವಾ ನಾಯಕತ್ವದ ಪದನಾಮಗಳಾಗಿ ಕಾರ್ಯನಿರ್ವಹಿಸುತ್ತಿದ್ದವು ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ, ಕಠಿಣ ಜಾತಿ ಗುರುತಿಸುವಿಕೆಗಳಿಗಿಂತ. ಈ ಬಿರುದುಗಳನ್ನು ಸಮುದಾಯಗಳಲ್ಲಿ ಜವಾಬ್ದಾರಿ, ಅಧಿಕಾರ ಮತ್ತು ಮಾನ್ಯತೆ ಪಡೆದ ಸೇವೆಯನ್ನು ಸೂಚಿಸಲು ವ್ಯಾಪಕವಾಗಿ ಬಳಸಲಾಗುತ್ತಿತ್ತು, ವಿಶೇಷವಾಗಿ ಗ್ರಾಮ ಆಡಳಿತ, ಗಿಲ್ಡ್ ನಾಯಕತ್ವ ಮತ್ತು ಧಾರ್ಮಿಕ ಸಂಸ್ಥೆಗಳಲ್ಲಿ.

ನಮ್ಮ ದೇವಾಂಗ ಸಮುದಾಯದಲ್ಲಿ, ನಾಯಕತ್ವ, ಸೇವೆ ಮತ್ತು ನೈತಿಕ ಅಧಿಕಾರವನ್ನು ಗುರುತಿಸಿ ಈ ಬಿರುದುಗಳನ್ನು ಅಳವಡಿಸಿಕೊಳ್ಳಲಾಯಿತು, ವಿಶೇಷವಾಗಿ ಔದ್ಯೋಗಿಕ ಸಂಘಗಳು, ಧಾರ್ಮಿಕ ಸಂಸ್ಥೆಗಳು ಮತ್ತು ರಾಜಮನೆತನದ ಆಡಳಿತವು ಆಳವಾಗಿ ಪರಸ್ಪರ ಸಂಬಂಧ ಹೊಂದಿದ್ದ ಅವಧಿಯಲ್ಲಿ. ಸುಸಂಘಟಿತ ನೇಕಾರ ಸಮುದಾಯವಾಗಿ ದೇವಾಂಗರು ಬಲವಾದ ಸಾಂಸ್ಥಿಕ ರಚನೆಗಳನ್ನು ನಿರ್ವಹಿಸುತ್ತಿದ್ದರು, ಅವುಗಳಿಗೆ ಸಮರ್ಥ ಆಧ್ಯಾತ್ಮಿಕ ಮತ್ತು ಆಡಳಿತಾತ್ಮಕ ನಾಯಕತ್ವದ ಅಗತ್ಯವಿತ್ತು.

"ಅದಕ್ಕೆ ಅನುಗುಣವಾಗಿ, "ಫಣಿ ಗೌಡ" ಎಂಬ ಉಪನಾಮವು ದೇವಾಂಗ ಸಮುದಾಯದೊಳಗೆ ಮಾನ್ಯತೆ ಪಡೆದ ಅಧಿಕಾರ ಮತ್ತು ಆಧ್ಯಾತ್ಮಿಕ ನಾಯಕತ್ವವನ್ನು ಸೂಚಿಸುತ್ತದೆ ಮತ್ತು ಒಕ್ಕಲಿಗರಂತಹ ಕೃಷಿಕ ಅಥವಾ ಭೂಮಾಲೀಕ ಸಮುದಾಯಗಳೊಂದಿಗೆ ಸಂಬಂಧವನ್ನು ಸೂಚಿಸುವುದಿಲ್ಲ. ಆಧುನಿಕ ಜಾತಿ ಚೌಕಟ್ಟುಗಳ ಮೂಲಕ ಮಧ್ಯಕಾಲೀನ ಗೌರವಾರ್ಥಗಳನ್ನು ಅರ್ಥೈಸುವುದು ಐತಿಹಾಸಿಕ ವಿರೂಪಕ್ಕೆ ಅಪಾಯವನ್ನುಂಟುಮಾಡುತ್ತದೆ ಮತ್ತು ಅದನ್ನು ತಪ್ಪಿಸಬೇಕು."

ಫಣಿ ಗೌಡ ಅವರ ಪ್ರಭಾವ ವಿಸ್ತರಿಸುತ್ತಿದ್ದಂತೆ, ಗಂಗಾವತಿಯಲ್ಲಿ ಕೆಲವು ಗುಂಪುಗಳು ಅವರು ಇತರ ಸಮುದಾಯಗಳನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದು ಆರೋಪಿಸಿ ಆರೋಪಗಳನ್ನು ಎತ್ತಿದವು ಎಂದು ವರದಿಯಾಗಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಸಾಮಾಜಿಕ ಮತ್ತು ಧಾರ್ಮಿಕ ವಿವಾದಗಳ ಮಧ್ಯಸ್ಥಗಾರನಾಗಿ ಆಡಳಿತಗಾರನ ಪಾತ್ರವನ್ನು ಪ್ರತಿಬಿಂಬಿಸುವ ಔಪಚಾರಿಕ ವಿಚಾರಣೆಗಾಗಿ ಅವರನ್ನು ಆನೆಗುಂಡಿಯ ಮಹಾರಾಜ ವೀರ ಪ್ರತಾಪ್ ಸಿಂಹ ಅವರ ನ್ಯಾಯಾಲಯಕ್ಕೆ ಕರೆಸಲಾಯಿತು.

ಸಂಪೂರ್ಣ ಮತ್ತು ವ್ಯವಸ್ಥಿತ ತನಿಖೆಯ ನಂತರ, ಆಡಳಿತಗಾರನು ಆರೋಪಗಳು ಆಧಾರರಹಿತವಾಗಿವೆ ಮತ್ತು ಸತ್ಯಕ್ಕಿಂತ ಪೈಪೋಟಿಯಿಂದ ಪ್ರೇರಿತವಾಗಿವೆ ಎಂದು ತೀರ್ಮಾನಿಸಿದನು.  ಫಣಿಗೌಡರ ಆಧ್ಯಾತ್ಮಿಕ ನಿಲುವು, ಸಂಘಟನಾ ಸಾಮರ್ಥ್ಯ ಮತ್ತು ದೇವಾಂಗ ಧಾರ್ಮಿಕ ಸಂಪ್ರದಾಯವನ್ನು ಬಲಪಡಿಸುವಲ್ಲಿ ಅವರ ಕೊಡುಗೆಯನ್ನು ಗುರುತಿಸಿ, ನಮ್ಮ ಸಮುದಾಯವು ಅವರಿಗೆ ಶ್ರೀ ಶ್ರೀ ಶ್ರೀ ಮುದಸ್ಸಂಗ ಮಹಾಸ್ವಾಮಿಜಿ ಎಂಬ ಗೌರವಾನ್ವಿತ ಬಿರುದನ್ನು ನೀಡಿತು ಮತ್ತು ಅವರನ್ನು ನಮ್ಮ ಸಮುದಾಯದ ಮೊದಲ ದೇವಾಂಗ ಜಗದ್ಗುರು ಎಂದು ಪರಿಗಣಿಸಿತು. 1371 ರಲ್ಲಿ ಅವರನ್ನು ಹಂಪಿಯಲ್ಲಿ ಶ್ರೀ ಹೇಮಕೂಟ ಗಾಯತ್ರಿ ಪೀಠದ ಮೊದಲ ಮುಖ್ಯಸ್ಥ ಮತ್ತು ಜಗದ್ಗುರು ಎಂದು ಔಪಚಾರಿಕವಾಗಿ ಸ್ಥಾಪಿಸಲಾಯಿತು. ಮಹಾರಾಜ ವೀರ ಪ್ರತಾಪ ಸಿಂಹ ಅವರ ರಾಜಮನೆತನದ ಪ್ರೋತ್ಸಾಹ ಮತ್ತು ಬೆಂಬಲದೊಂದಿಗೆ 

ಶೈವ ಮತ್ತು ಶಾಕ್ತ ಸಂಪ್ರದಾಯಗಳೊಂದಿಗೆ ದೀರ್ಘಕಾಲ ಸಂಬಂಧ ಹೊಂದಿದ್ದ ಹೇಮಕೂಟ ಬೆಟ್ಟದ ಪವಿತ್ರ ಭೂದೃಶ್ಯದೊಳಗೆ ಇರುವ ಶ್ರೀ ಹೇಮಕೂಟ ಗಾಯತ್ರಿ ಪೀಠದ ಸ್ಥಾಪನೆಯು ಒಂದು ಪ್ರಮುಖ ಐತಿಹಾಸಿಕ ಮೈಲಿಗಲ್ಲಾಗಿದೆ. ಇದು ದೇವಾಂಗ ಸಮುದಾಯಕ್ಕೆ ವಿಶಿಷ್ಟವಾದ, ಸಂಘಟಿತ ಮತ್ತು ರಾಜಮನೆತನದ ಮಾನ್ಯತೆ ಪಡೆದ ಆಧ್ಯಾತ್ಮಿಕ ಸಂಸ್ಥೆಯನ್ನು ಒದಗಿಸಿತು, ಅದರ ಧಾರ್ಮಿಕ ತತ್ವಶಾಸ್ತ್ರ, ಸಾಂಸ್ಕೃತಿಕ ಆಚರಣೆಗಳು ಮತ್ತು ಸಾಂಸ್ಥಿಕ ಸ್ವಾಯತ್ತತೆಯಲ್ಲಿ ದೃಢವಾಗಿ ಬೇರೂರಿದೆ.

ಫಣಿಗೌಡ ಮತ್ತು ಶ್ರೀ ಹೇಮಕೂಟ ಗಾಯತ್ರಿ ಪೀಠ, ಹಂಪಿಯ ಐತಿಹಾಸಿಕ ಪರಂಪರೆಯನ್ನು ರಕ್ಷಿಸುವುದು ಕೇವಲ ಭಾವನೆ ಅಥವಾ ಸಮುದಾಯದ ಹೆಮ್ಮೆಯ ವಿಷಯವಲ್ಲ, ಆದರೆ ಸಾಂಸ್ಥಿಕ ಜವಾಬ್ದಾರಿ ಮತ್ತು ಐತಿಹಾಸಿಕ ಸಮಗ್ರತೆಯ ವಿಷಯವಾಗಿದೆ.  ಮುಂದಿನ ಪೀಳಿಗೆಗೆ ದೇವಾಂಗ ಸಮುದಾಯದ ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಂಸ್ಥಿಕ ಪರಂಪರೆಯನ್ನು ಸಂರಕ್ಷಿಸಲು ದಾಖಲಾತಿ, ವಿದ್ಯಾರ್ಥಿವೇತನ ಮತ್ತು ಸಾರ್ವಜನಿಕ ಜಾಗೃತಿಯ ಮೂಲಕ ಪೂರ್ವಭಾವಿ, ಸಾಕ್ಷ್ಯಾಧಾರಿತ ನಿಶ್ಚಿತಾರ್ಥವು ಅತ್ಯಗತ್ಯ.

ಶ್ರೀ ಹೇಮಕೂಟ ಗಾಯತ್ರಿ ಪೀಠ ಹೇಂಪಿ ಕರ್ನಾಟಕ.

ದೇವಾಂಗ ಜಗದ್ಗುರು ಗುರುಗಳ ಪಟ್ಟಿ:

ಶ್ರೀ ಶ್ರೀ ಶ್ರೀ ಮುದ್ದುಸಂಗ ಸ್ವಾಮಿ I. 1371-1464. 

ಶ್ರೀ ಶ್ರೀ ಶ್ರೀ ಮುದ್ದುಸಂಗ ಸ್ವಾಮಿ II 1464-1550. 

ಶ್ರೀ ಶ್ರೀ ಶ್ರೀ ಮುದ್ದುಸಂಗ ಸ್ವಾಮಿ III.  1550-1646. 

ಶ್ರೀ ಶ್ರೀ ಶ್ರೀ ದೂರ್ವಾಸಮುನಿ ಸ್ವಾಮಿ.  1646-1694. 

ಶ್ರೀ ಶ್ರೀ ಶ್ರೀ ಮುದ್ದುಸಂಗ ಸ್ವಾಮಿ IV.   1694-1779 

ಶ್ರೀ ಶ್ರೀ ಶ್ರೀ ದಯಾನಂದ ಪುರಿ ಸ್ವಾಮಿಗಳು.  1990 ರಿಂದ ಇಲ್ಲಿಯವರೆಗೆ.

   ಶ್ರೀ ಶ್ರೀ ಶ್ರೀ ದಯಾನಂದ ಪುರಿ ಮಹಾ ಸ್ವಾಮೀಜಿ


“गुरुर्ब्रह्मा गुरुर्विष्णुः गुरुर्देवो महेश्वरः ।
गुरुः साक्षात् परं ब्रह्म तस्मै श्रीगुरवे नमः ॥”
#828

Comments

Popular posts from this blog

"A Century of Collective Vision: Devanga Sangha at 100."

Devanga vs Weaver: Varna vs Caste.

Bengaluru_ Devanga Sangha's Centenary Year